ಮಂಡ್ಯ ಜಿಲ್ಲೆಯ ಪುರಸಭೆಯ ವತಿಯಿಂದ ಪಟ್ಟಣದ ಅಗ್ರಹಾರ ಬಡಾವಣೆ, ಚಕ್ಕೆಲವಂಗ ಬೀದಿ, ರಾಮಯ್ಯ ಕಾಲೋನಿ, ಹೊಸಹೊಳಲು ಸಿಂಗಮ್ಮ ದೇವಿ ದೇವಸ್ಥಾನ, ಮುಸ್ಲಿಂ ಬ್ಲಾಕ್,
Report By Bora Nayak | Mandya District | Last Updated at April 3 2020
ಮಂಡ್ಯ ಜಿಲ್ಲೆಯ ಪುರಸಭೆಯ ವತಿಯಿಂದ ಪಟ್ಟಣದ ಅಗ್ರಹಾರ ಬಡಾವಣೆ, ಚಕ್ಕೆಲವಂಗ ಬೀದಿ, ರಾಮಯ್ಯ ಕಾಲೋನಿ, ಹೊಸಹೊಳಲು ಸಿಂಗಮ್ಮ ದೇವಿ ದೇವಸ್ಥಾನ, ಮುಸ್ಲಿಂ ಬ್ಲಾಕ್, ಪೌರಕಾರ್ಮಿಕರ ಕಾಲೋನಿಗಳಿಗೆ ಮನೆಗೆ ಅರ್ಧ ಲೀಟರ್ ನಂತೆ 750ಲೀಟರ್ ಪರಿಶುದ್ಧ ನಂದಿನಿ ಟೋನ್ಡ್ ಹಾಲನ್ನು ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಸಿಬ್ಬಂಧಿಗಳು ವಿತರಿಸಿದರು
ತಾಲೂಕು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವರಾಜು, ಮನ್ ಮುಲ್ ವೈದ್ಯರಾದ ಡಾ.ಮೋಹನ್, ಮಾರುಕಟ್ಟೆ ವ್ಯವಸ್ಥಾಪಕ ಹೆಮ್ಮನಹಳ್ಳಿ ರವಿ, ಪುರಸಭೆ ಸದಸ್ಯರಾದ ಕೆ.ಎಸ್.
ಪ್ರಮೋದ್, ಡಿ.ಪ್ರೇಮಕುಮಾರ್, ಇಂದ್ರಾಣಿ ವಿಶ್ವನಾಥ್, ಶೋಭಾದಿನೇಶ್, ಕೆ.ಎಸ್.ಸಂತೋಷ್, ಹೆಚ್.ಆರ್.ಲೋಕೇಶ್, ಹೆಚ್.ಡಿ.ಅಶೋಕ್, ಪುರಸಭೆ ಪರಿಸರ ಎಂಜಿನಿಯರ್ ರಕ್ಷಿತ್, ನರಸಿಂಹಶೆಟ್ಟಿ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 14ರವರೆಗೂ ಬೆಳಗಿನ ವೇಳೆಯಲ್ಲಿ ಪುರಸಭೆ ವ್ಯಾಪ್ತಿಯ ಐದು ಸ್ಮಂ ಕಾಲೋನಿಗಳಲ್ಲಿ ವಾಸವಾಗಿರುವ ಸುಮಾರು ಒಂದು ಸಾವಿರದ ನಾನೂರ ಐವತ್ತು ಕುಟುಂಬಗಳಿಗೆ ಮನೆಗೆ ಅರ್ಧ ಲೀಟರ್ ನಂದಿನಿ ಹಾಲನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ವಿತರಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ವಿವರಿಸಿದರು