ಸೆಂಟ್ರಲ್ ಜೈಲಿನಲ್ಲಿ ಕೊರೊನಾ ಸೋಂಕು ಪತ್ತೆ – ಖೈದಿಗಳ ಸಾವಿನ ಶಂಕೆ..?
Report By News Toniq | Bengaluru | Last Updated at April 20 2020
ಬೆಂಗಳೂರು : ಇಡೀ ದೇಶದಾದ್ಯಂತ ಕೊರೊನಾ ಮಾಹಾಮಾರಿ ಅಟ್ಟಹಾಸ ಮೇರೆಯುತ್ತಿದೆ..ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ..ಮತ್ತೊಂದು ಆಘಾತಕಾರಿ ವಿಷಯ ಅಂದ್ರೆ ಬೆಂಗಳೂರಿನ ಹೊರವಲಯದಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೂ ಕೊರೊನಾ ಸೋಂಕು ಹರಡಿರುವ ಬಗ್ಗೆ ಅನುಮಾನ ಮೂಡಿದ್ದು, ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ..ಜೈಲ್ಲಿನಲ್ಲಿರೋ ಖೈದಿಗಳಿಗೆ ಕೊರೊನಾ ಸೋಂಕು ತಗಲಿದ್ದು,ಇಬ್ಬರು ಖೈದಿಗಳು ಕೊರೊನಾ ದಿಂದ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ..ಆದರೆ ಕೊರೊನಾ ಸೋಂಕಿನಿಂದ ಖೈದಿಗಳು ಮೃತಪಟ್ಟಿರೋ ವಿಷಯವನ್ನು ಜೈಲು ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ ..ಕೊರೊನಾದಿಂದ ಜೈಲಿನಲ್ಲಿ ಖೈದಿಗಳು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹೊರ ಹೋಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ..ಅಧಿಕಾರಿಗಳ ಕೆಲ ದಿನಗಳ ಹಿಂದೆ ಖೈದಿಗಳನ್ನು ಒಂದೇ ಬ್ಯಾರಕ್ ನಲ್ಲಿ ನೂರಾರು ಖೈದಿಗಳನ್ನು ಹಾಕಿದ್ರು..ಇದರಿಂದಲ್ಲೇ ಕೊರೊನಾ ಸೋಂಕು ಹರಡಿರೋ ಶಂಕೆ ಇದೆ ಎನ್ನಲಾಗಿದೆ.. ಒಂದೇ ಬ್ಯಾರಕ್ ನಲ್ಲಿ 70 ರಿಂದ 80 ಖೈದಿಗಳಿದ್ದಾರೆ..ಇವರನ್ನು ಭೇಟಿಯಾಗಲ್ಲೂ ಕೆಲವರು ಬಂದು ಹೋಗಿದ್ದಾರೆ..ಹೀಗಾಗಿ ಸೋಂಕು ತಗಲಿರೋ ಸಾಧ್ಯತೆ ಇದೆ ಎನ್ನಲಾಗಿದೆ..