Friday, April 19, 2024
The Ancient Times

ಪ್ರತ್ಯೇಕ ರಾಜ್ಯ ಕೂಗು: ಸ್ವಾಮೀಜಿಗಳ ಬೆಂಬಲ

ದಾವಣಗೆರೆ: ಪ್ರತ್ಯೇಕ ರಾಜ್ಯಗಳ ಕೂಗಿಗೆ ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಗದಗ ಜಿಲ್ಲೆಯ ಬಾಲೇ ಹೊಸೂರು ಮಠದ ಧಿಂಗಾಲೇಶ್ವರ ಸ್ವಾಮೀಜಿ ಈ ವಿಚಾರದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಸರಿಯಾದ ಸೌಕರ್ಯಗಳನ್ನು ನೀಡದೇ ಹೋದಲ್ಲಿ ಈ ಭಾಗದ ಎಲ್ಲ ಸ್ವಾಮೀಜಿಗಳು ಉತ್ತರ ಕರ್ನಾಟಕವನ್ನು ಪ್ರತ್ಯೇಕಿಸಲು ಬೆಂಬಲ ಸೂಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸೌಲಭ್ಯ ಸಿಗದಿದ್ದಾಗ ಪ್ರತ್ಯೇಕತೆ ಕೂಗು ಸಾಮಾನ್ಯವಾಗಿದ್ದು, ಈ ಕೂಗು ಇನ್ನಷ್ಟು ಹೆಚ್ಚುವ ಮುನ್ನವೇ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ. ಬಜೆಟ್‌ ಮಂಡನೆ ಬಳಿಕ ರಾಜ್ಯದಲ್ಲಿ ಉತ್ತರ ಕರ್ನಾಟಕದ ಕೂಗು ಮತ್ತೆ ಜೀವ ಪಡೆದುಕೊಂಡಿದೆ. ಬೆಳಗಾವಿ 2ನೇ ರಾಜಧಾನಿಯಾಗಬೇಕು. 20 ಮುಖ್ಯ ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ವಿಕೇಂದ್ರೀಕೃತವಾಗಬೇಕು. ಸುವರ್ಣಸೌಧದಲ್ಲಿ 2 ತಿಂಗಳಿಗೊಮ್ಮೆ ಸದನ ನಡೆಸಬೇಕು. ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದರೆ ಮಾತ್ರ ಪ್ರತ್ಯೇಕತೆ ಕೂಗು ಶಮನವಾಗುತ್ತದೆ ಎಂದರು.
ಜನರ ನೋವಿನ ನುಡಿ

ಉತ್ತರ ಕರ್ನಾಟಕದ ಜನರಿಗೆ ಅನ್ಯಾಯವಾಗಿದ್ದು, ಇದು ಜನರ ನೋವಿನ ನುಡಿ. ಈ ಕಾರಣದಿಂದಲೇ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದೆ. ಅಖಂಡ ಕರ್ನಾಟಕ ನಿರ್ಮಾಣ ಮಾಡಿದವರು ಉತ್ತರಕರ್ನಾಟಕದವರಾಗಿದ್ದು, ತಾಳ್ಮೆ, ಅನ್ಯಾಯ ಪರೀಕ್ಷೆ ಮಾಡದೆ ಸಮಸ್ಯೆ ಸರಿಪಡಿಸಲಿ ಎಂದು ಎಚ್ಚರಿಕೆ ನೀಡಿದ್ದಾರೆ.

60 ವರ್ಷಗಳಿಂದ ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶವಾಗಿದೆ. ಕೃಷ್ಣ, ಮಹದಾಯಿಯಲ್ಲಿ ಅನ್ಯಾಯವಾದ ವೇಳೆ ಈ ಕೂಗು ಕೇಳಿ ಬಂದಿತ್ತು. ಕರ್ನಾಟಕ ಇಬ್ಬಾಗವಾಗಬೇಕೆಂಬ ಆಸೆ ಯಾರಲ್ಲೂ ಇಲ್ಲ ಎಂದಿರು ಅವರು, ಈ ಸಂಬಂಧ ಜು.31ರಂದು ಉತ್ತರ ಕರ್ನಾಟಕ ಸ್ವಾಮೀಜಿಗಳ ಸಭೆ ನಡೆಯಲಿದೆ. ಅಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

ದಕ್ಷಿಣ ಕರ್ನಾಟಕ ಮಾತ್ರ ಅಭಿವೃದ್ಧಿ

ತೊಗಟವೀರ ಕಲ್ಯಾಣ ಮಂಟಪದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗದಗ ಜಿಲ್ಲೆಯ ಬಾಲೇ ಹೊಸೂರು ಮಠದ ಧಿಂಗಾಲೇಶ್ವರ ಸ್ವಾಮೀಜಿ, ಕರ್ನಾಟದಲ್ಲಿ ಕೇವಲ ದಕ್ಷಿಣ ಕರ್ನಾಟಕ ಮಾತ್ರ ಅಭಿವೃದ್ಧಿಯಾಗಿದೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಗೆ ಸಂಪೂರ್ಣ ಬೆಂಬಲವಿದೆ. ಈಗಾಗಲೇ ಮೈಸೂರು, ತುಮಕೂರು, ಬೆಂಗಳೂರು, ಹಾಸನ ಮಾತ್ರ ಅಭಿವೃದ್ಧಿಗೊಂಡಿದೆ. ಇದೇ ಮಾದರಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಪಡಿಸಲಿ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಸಿಎಂ ಶ್ರಮಿಸಲಿ ಎಂದು ಆಗ್ರಹಿಸಿದರು.

ಸಿಎಂ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ಸಾಕಷ್ಟು ಆಶ್ವಾಸನೆಗಳನ್ನು ನಿಡಿದ್ದರು. ಆದರೆ ಸರಕಾರ ರಚನೆಗೊಂಡ ಬಳಿಕ ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಉತ್ತರ ಕರ್ನಾಟಕವನ್ನು ಕೇವಲ ಬಳಕೆ ಕರ್ನಾಟಕವನ್ನಾಗಿ ಮಾತ್ರ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ವಿಚಾರ ಬಂದಾಗ ದೂರ ಇಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿದ್ದಲ್ಲಿ, ಈ ಭಾಗದ ಎಲ್ಲ ಮಠಾಧೀಶರು ಸೇರಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ಮಾಡುವುದಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.

The Ancient Times

Because we’re journalists, we’re impatient. We want to gather the news as quickly as possible, using any technological resource available. And when we’re as sure of the story as we can be, we want to share it immediately, in whatever way reaches the most people. The Internet didn’t plant these ideas in our heads. We’ve always been this way.

Leave a Reply

Discover more from The Ancient Times

Subscribe now to keep reading and get access to the full archive.

Continue reading